Thursday, March 25, 2021

ಕವನ

 ನಾನಿರುವ ಈ ನೆಲದಲ್ಲಿ ಹೊನ್ನ ಬೆಳವೆ, ನಾನು ಬೆಳೆಯುವ ಹೊನ್ನಲ್ಲಿ ಅನ್ನವನಿಕ್ಕುವೆ,ಜಗಕೆ, ನನ್ನ ಹೊನ್ನಲ್ಲಿ ಜಗವ ತಣಿಸುವೆ, ನಾನು ಹುಟ್ಟಿದ ಈ ಊರಲ್ಲಿ ಯಾವಾಗಲೂ ಹೊನ್ನ ಬೆಳೆವ ಚಿನ್ನದ ಮಗನಾಗಿ ಬೆಳೆವೆ, ನಾನು ಅನ್ನವ ಹೊನ್ನಗಿಸುವ ರೈತ.

Wednesday, March 10, 2021

ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ.

 *ಮಕ್ಕಳ ಹಕ್ಕುಗಳ ಜಾಗೃತಿ* *ನವೆಂಬರ್ 23-28 2020ರ* *ವರಿಗೆ*                      *ಮಕ್ಕಳ ಹಕ್ಕುಗಳ* ಬಗ್ಗೆ ಶಿಕ್ಷಕರು ವಿಷಯವನ್ನು ಸಂಗ್ರಹಿಸಿ ಸಾಧ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು  ಮೂಲತಹ ಮಕ್ಕಳಿಗೆ ವಿವರವಾದ ಮಾಹಿತಿಯನ್ನು ನೀಡಿತದರು. ಶಿಕ್ಷಕರು ತಮ್ಮ ಮೊಬೈಲ್ ಯಿಂದ ಮಾಹಿತಿ ಡೌನ್ಲೋಡ್ ಮಾಡಿಕೊಂಡು ಇಂಗ್ಲಿಷ್ ನಲ್ಲಿ ಇರುವ ಮಾಹಿತಿ ಯನ್ನು ಕನ್ನಡದಲ್ಲಿ ವಿವರಸಿ ಬರೆಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಮೊಬೈಲ್ ಯಿಂದ ಮಾಹಿತಿ ಪಡೆದುಕೊಳ್ಳಲು ಸೂಚಿಸಲಾಯಿತು. ನಂತರ ಮಕ್ಕಳಿಗೆ ಬೇಕಾದ ಹಕ್ಕುಗಳು, ಅವುಗಳ ಮಹತ್ವ, ರಕ್ಷಣೆ  ಮತ್ತು ಅವುಗಳನ್ನು ಪಾಲಿಸುವುದನ್ನ ಸೂಚಿಸಲಾಯಿತು. ಅವರ ಅನುಭವದ ಆಧಾರದ ಮೇಲೆ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸಲಾಯಿತು. ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದರ ಸಲುವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಪೋಸ್ಟರಗಳನ್ನ ತಯಾರಿಸುವುದು ಮತ್ತು ಚಿತ್ರಬಿಡಿಸುವುಸುವ ಸ್ಪರ್ಧೆ ಏರ್ಪಡಿಸಲಾಗಿದೆ ಮತ್ತು ವಿಜೇತರಿಗೆ ಬಹುಮಾನ ನೀಡಲಾಯಿತು. ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಪತ್ತೆ ಹಚ್ಚಲು ಶಾಲಾ ಮಕ್ಕಳಿಗೆ ಸೂಚಿಸಲಾಯಿತು. ಅಂತಹ  ಪ್ರಕರಣಗಳು ಕಂಡುಬದರೆ ತಮ್ಮ ಶಿಕ್ಷಕರಿಗೆ ಹೇಳಲು ಸೂಚಿಸಲಾಯಿತು.  ಮಕ್ಕಳು  ಸಂಗ್ರಹಿಸಿದ ವಿಷಯದ ಆಧಾರದ ಮೇಲೆ ಭಾಷಣ ಸ್ಪರ್ಧೆ ಮತ್ತು ಪ್ರಭಂದ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಭಾರತದ ಸಂವಿಧಾನ ಪೀಠಿಕೆ ಮತ್ತು ಆಶಯಗಳನ್ನು ಪರಿಚಯ ಮಾಡಲಾಯಿತು. ಸಂವಿಧಾನ ಪೀಠಿಕೆಯನ್ನು ಮಕ್ಕಳಿಂದಲೇ ಓದಿಸಿ ಅದರ ಅರ್ಥ ಮತ್ತು ಆಶಯಗಳನ್ನು ವಿವರಿಸಲಾಯಿತು. ಮೂಲಭೂತ ಕರ್ತವ್ಯಗಳನ್ನ ಪರಿಚಯಿಸಿ ವಿವರಿಸಲಾಯಿತು. ಸಂವಿಧಾನದ ಪೀಠಿಕೆಯನ್ನು ಸುಂದರವಾದ ಪ್ಲೆಕ್ಸ್, ಕಾರ್ಡ್ ಶೀಟ್ ಗಳ ಮೇಲೆ ಮಕ್ಕಳಿಂದ ಬರೆಸಿ ಜಾಗೃತಿ ಮೂಡಿಸಲಾಯಿತು.