Wednesday, April 21, 2021

"ಕವನ"-ಶೀರ್ಪಿಕೆ -ಭಾಗ ಎರಡು.

ಉಳುವ ರೈತನ ನೇಗಿಲವಾಗುವುದು,                                ನೇಗಿಲ ಕಟ್ಟಿ ಎಳೆಯುವ ಜೋಡಿ ಎತ್ತುಗಳಾಗುವುದು,            ಬೀಜವ ಬಿತ್ತುವ ಹೆಣ್ಣಾಗುವುದು,                                        ಸುಗ್ಗಿಯ ಹಬ್ಬವಾಗುವುದು ಕವನ ll                                                                                                                        ವಸಂತ ಋತುವಿನ ಗಾನ ಕೋಗಿಲೆಯಾಗುವುದು,                  ಚಿಗುರುವ ಗಿಡ ಮರದ ಎಲೆಗಳಾಗುವುದು,                      ಎಲೆಗಳ ಮದ್ಯೆ ಮೂಡಿಬರುವ ಮೊಗ್ಗಾಗುವುದು,              ಹಕ್ಕಿಪಕ್ಷಿಗಳು ಚಿಲಿಪಿಲಿಗುಟ್ಟುವ ಕಲರವಾ ಆಗುವುದು  ಕವನll                                                                                                                                               ಕಾರ್ಮೋಡಗಳಿಂದ ಸುರಿವ ಮಳೆ ಹನಿಗಳಾಗುವುದು          ನದಿಗಳು ತುಂಬಿ ಬೋರ್ಗರೆವಾ ಜಲಪಾತಗಳಾಗುವುದು,      ನದಿಗಳಿಗೆ ಕಟ್ಟಿರುವ ಆಣೆಕಟ್ಟುಗಳು ಆಗುವುದು,                ಅಣೆಕಟ್ಟುಗಳಲ್ಲಿನ ನೀರಾಗುವುದು ಕವನ ll                                                                                                                ನಿಂತ ಮಳೆ ನೀರಲ್ಲಿ ವಟಗುಟ್ಟುವ ಕಪ್ಪೆಗಳಂತೆ,                  ಶಾಲೆಯಲ್ಲಿ ಯಾವಾಗಲೂ ಕಿರುಚುವ ಮಕ್ಕಳಂತೆ,                ನಗರ ಪಟ್ಟಣಗಳಲ್ಲಿನ ವಾಹನಗಳ ಕೀಗುಟ್ಟುವ ಶಬ್ಧದಂತೆ,    ತಾಯ ಮಡಿಲಲ್ಲಿ ಅಳುವ ಮಗುವಿನಂತೆ ಕವನll                                                                                                      ವೈಧ್ಯಾಲಯಗಳಲ್ಲಿ ರೋಗಿಗಳ ರೋಧವಾಗುತ್ತದೆ,              ವ್ಯಧ್ಯರು ನೀಡುವ ಸೂಚನೆಯಗುತ್ತದೆ,                            ಸಾವಾದಾಗ ರಾಮ... ರಾಮ... ಎನ್ನುವ ಶೋಕವಾಗುತ್ತದೆ,    ಸತ್ತಮೇಲೆ ಸತ್ತವರ ಸ್ಮರಣೆಯಾಗುತ್ತದೆ ಕವನ ll                                                                              ಚೈತ್ಯಾಲಾಯಗಳಲ್ಲಿನ ಸಂಗೀತ ಸುಧೆಯಾಗುತ್ತದೆ,              ವಾಸ್ತುಶಿಲ್ಪಕಲಾ ವೈಭವಾಗುತ್ತದೆ,                                        ರಾಜಾಪ್ರಭುತ್ವದ ವೈಖರಿಯ ಬಣ್ಣನೆಯಗುತ್ತದೆ,                  ಯುಗಗಳ ನಾಮಸ್ಮರಣೆಯಾಗುತ್ತದೆ ಕವನ ll 

 

Thursday, April 15, 2021

'"ಕವನ"-ಶೀರ್ಪಿಕೆ.

 "ಕವನ".                                      ಕಾಡು ಮೇಡ ಅಲೆಸುವುದು, ಊರು ಕೇರಿ ತಿರುಗಿಸುವುದು, ಬೆಟ್ಟ ಗುಡ್ಡಗಳ ಮೇಲೆ ಕುಳ್ಳಿರಿಸುವುದು,            ನಿಂತಲ್ಲಿ ನಿಲ್ಲಲಾರದೆ ನಡೆದಾಡಿಸುವುದು, ಕವನ ll         ಕುಂತಲ್ಲೇ ಕೂಪದಲ್ಲಿನ ಮಂಡೂಕವಾಗಿಸುತ್ತದೆ,       ನಿಂತಲ್ಲೇ ನೆಟ್ಟಿರುವ ಕಲ್ಲಿನ ಕಂಭವಾಗಿಸುತ್ತದೆ,              ಮಲಗಿದಲ್ಲೇ ಬಾನಂಗಳದಲ್ಲಿ ಬರುವ ಚಂದಿರವಾಗಿಸುತ್ತದೆ,  ನಿದ್ರೆಯಿಂದೆದ್ದು ಕತ್ತಲೆಯ ಸರಿಸಿ ಬೆಳಕಿನಡೆಗೆನಡೆಸುತ್ತದೆ ಕವನ ll.                                   ಕಾನನದ ಕಾಡಗಿಚ್ಚು ಮರವ ಸುಡುತ್ತಿರಲು,      ನದಿಯ ನೀರು ಮರಕ್ಕೆ ನೀರುಣಿಸುತ್ತಿರಲು, ಪ್ರಾಣಿ ಸಂಕುಲಗಳು ತಮ್ಮ ಹೊರೆಯ ಅರಿಯುತ್ತಿರಲು,  ಪ್ರಕೃತಿಯ ಸೊಬಗನ್ನು ವರ್ಣಿಸುತ್ತದೆ ಕವನ ll.                        ಬರೆವ ಲೇಖನಿಗೆ ಬಣ್ಣ ಬಣ್ಣದ ಚಿತ್ತಾರವಾಗುತ್ತದೆ, ಹಾಡುವ ಹಾಡಿಗೆ ಆಹಾರವಾಗುತ್ತದೆ, ಕೇಳುವ ಗೀತೆಗೆ ವೀಣೆಯಾಗುತ್ತದೆ,  ನೋಡುವ ಕಣ್ಣಿಗೆ ಮುನ್ನೋಟವಾಗುತ್ತದೆ, ಕವನ ll.                         ಮುಡಿವ ಹೆಣ್ಣಿಗೆ ಹೂವಾಗುವುದು,  ಮದುವೆ ಮನೆಯ ಆಮಂತ್ರಣವಾಗುವುದು, ಮಧುಮಗಳ ಲಜ್ಜೆಯಾಗುವುದು, ವಧುವರರ ಪ್ರತಿಜ್ಞೆಯಾಗುವುದು ಕವನ ll.      ಹಬ್ಬಗಳ ಔತಣವಾಗುವುದು, ಪೂಜೆಗೆ ಬೇಕಾಗುವ ಸಾಮಗ್ರಿಗಳಾಗುವುದು, ಸಾಧುಸಂತರು ಜಪಿಸುವ ಮಂತ್ರ ಪಠಣೆಯಾಗುವುದು, ದೇವರು ಕೊಡುವ ವರವಾಗುವುದು ಕವನ ll.  ಈ ಕವನ 'ಕವನ'ದ ಬಗ್ಗೆಯೇ ಬರೆಯಲಾಗಿದೆ.    ದೇವರಾಜು ಸಹ ಶಿಕ್ಷಕರು, ಮಲ್ಕಪಲ್ಲಿ GHPS.

Friday, April 2, 2021

ಕವನ -ಮರ, ದೇವರಾಜು, ಸ, ಶಿ.

 ಧರೆಯ ಹೊಡಲಲ್ಲಿ ನೀನೊಂದು ಪುಟ್ಟ ಮರ. ನಿನ್ನ ಮಯ್ಯ ತುಂಬಾ ಬರಿ ರೆಂಬೆ ಕೊಂಬೆಗಳು. ರೆಂಬೆ ಕೊಂಬೆಗಳಾಲೆಲ್ಲ ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳು. ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳ ಕಲರವ, ಜೊತೆಗೆ ಹಕ್ಕಿ ಪಕ್ಷಿಗಳು ಹರಾಡುವ ಮೆರುಗು, ಗಾಳಿಯಲ್ಲಿ ತೇಲಾಡುವ ನಿನ್ನ ಹಚ್ಚ ಹಸಿರಿನ   ಎಲೆಗಳು ಪ್ರಕೃತಿ ಸೌಂಧರ್ಯಕ್ಕೆ ಪ್ರತಿ ಗಳಿಗೆಯಲ್ಲೂ ಮುಧ ನೀಡುವಂತಿದೆ.                                                                  ವಸಂತ ಕಾಲದ ಗಾನ ಕೋಗಿಲೆ, ಕಣ್ಮನ ಸೆಳೆಯುವ ಜನಸಂದಣಿಯ ಗಲಾಟೆ ಗದ್ದಲ, ನಡುವೆ ವಾಹನಗಳ ಶಬ್ಧ, ರಸ್ತೆಯ ಇಕ್ಕೆಲಗಳಲ್ಲಿ ನಾನಾರೀತಿಯ ವಸ್ತುಗಳು, ಹಣ್ಣು, ತರಕಾರಿಗಳು, ನಾನಾರೀತಿಯ ಸೊಬಗು, ನೋಡಲು ಎರಡು ಕಣ್ಣುಗಳು ಸಾಲದು, ಇವೆಲ್ಲಕ್ಕೂ ಮಿಗಿಲಾಗಿ ಸಂತೆಗೆ ಬಂದು ಹೋಗುವ ಜನಕೆ ಬಿಸಿಲ ಬೇಗೆಯಿಂದ ಸುಧಾರಿಸಿಕೊಳ್ಳಲು   ನೀನು ನೆರಳಾಗಿರುವೆ. ನಿನ್ನ ಜೀವನ ಅಮರವಾದದ್ದು ಹಾಗೂ ಅಮರವಾಗಿರಲಿ.